ಗೃಹಲಕ್ಷ್ಮೀ ಯೋಜನೆಯ 4 ನೇ ಕಂತಿನ 2,000 ರೂ. ಜಮಾ | Gruhalakshmi 4th Installment Amount 2,000 Rupees Credited

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ.. ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮೀ ಯೋಜನೆಯ (Gruhalakshmi 4th Installment Amount) ನಾಲ್ಕನೇ ಕಂತಿನ ಹಣ ಜಮಾ ಆಗಿರುವ ಕುರಿತು ಈ ಲೇಖನದಲ್ಲಿ ತಿಳಿಸಲಾಗಿದೆ. ಅರ್ಜಿ ಸಲ್ಲಿಸಿರುವ ಫಲಾನುಭವಿಗಳಿಗೆ ಈ ಮಾಹಿತಿ ಮಹತ್ವದ್ದಾಗಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದಾಗಿ ತಿಳಿಸಲಾಗಿತ್ತು. ಅದರಂತೆ ಐದು ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಅರ್ಹ ಫಲಾನುಭವಿಗಳು ಈ ಯೋಜನೆಗಳ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ.

Gruhalakshmi 4th Installment Amount Credited

ಸರ್ಕಾರ ಜಾರಿಗೆ ತಂದಿರುವ ಈ ಐದು ಯೋಜನೆಗಳು ಬಹಳ ಪ್ರಭಾವ ಬೀರಿದ್ದು, ರಾಜ್ಯದ ಮಹಿಳೆಯರಿಗೆ ತುಂಬ ಅನುಕೂಲ ಆಗಿದೆ. ಆಗಸ್ಟ 30 ರಿಂದ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೆ ತರಲಾಗಿದೆ. ಈಗಾಗಲೇ ಎರಡು-ಮೂರು ಕಂತುಗಳ ಹಣ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ 2,000 ರೂ. ಜಮಾ ಮಾಡಲಾಗಿದೆ.

ಗೃಹಲಕ್ಷ್ಮೀ ಯೋಜನೆಯ ನಾಲ್ಕನೇ ಕಂತಿನ ಹಣವನ್ನು ವಿವಿಧ ಜಿಲ್ಲಾವಾರು ಜಮಾ ಮಾಡಲಾಗುತ್ತೀದೆ. ಅರ್ಹ ಫಲಾನುಭವಿಗಳ ಬ್ಯಾಂಕ್‌ ಖಾತೆಗಳಿಗೆ 2,000 ರೂ. ಯನ್ನು Gruhalakshmi DBT ಮೂಲಕ ವರ್ಗಾವಣೆ ಮಾಡಲಾಗಿದೆ.

3ನೇ ಕಂತಿನ ಮತ್ತು 4 ನೇ ಕಂತಿನ 2,000 ರೂ. ಜಮಾ..

ಸರ್ಕಾರ ಹೇಳಿದಂತೆ ಪ್ರತಿ ತಿಂಗಳು ದಿನಾಂಕ 20 ರ ಒಳಗಾಗಿ ಗೃಹಲಕ್ಷ್ಮೀ ಯೋಜನೆಯ (Gruhalakshmi Scheme 4th Installment Date) ಹಣ ಜಮಾ ಮಾಡುವುದಾಗಿದೆ ಹೇಳಿತ್ತು ಆದರೆ ಕೆಲವು ಫಲಾನುಭವಿಗಳಿಗೆ ತಡವಾಗಿ ಜಮಾ ಆಗಿದೆ. ನಮಗೆ ಗೊತ್ತಿರುವ ಒಬ್ಬರಿಗೆ 3ನೇ ಕಂತಿನ 2,000 ರೂ. ಹಣ ಜನವರಿ 01, 2024 ರಂದು ಜಮಾ ಆಗಿದ್ದು, ಮತ್ತೆ ಇವತ್ತು ಅಂದರೆ 03-01-2024 ರಂದು ನಾಲ್ಕನೇ ಕಂತಿನ ದುಡ್ಡು ಬ್ಯಾಂಕ್‌ ಖಾತೆಗೆ ಬಂದಿದೆ.

ಒಂದು ದಿನದ ಅಂತರದಲ್ಲಿ ಏರಡು ಕಂತಿನ ಹಣ ಜಮಾ ಮಾಡಲಾಗಿದೆ. ಕೆಲವೂ ಬಾರಿ ತಾಂತ್ರಿಕ ಕಾರಣದಿಂದಾಗಿ ಬ್ಯಾಂಕ್‌ ಖಾತೆಗೆ ಹಣ ಜಮಾ ಆಗುವುದು ತಡವಾಗುತ್ತದೆ. ಯಾವುದೇ ಕಾರಣಕ್ಕೂ ಫಲಾನುಭವಿಗಳು ಗಾಬರಿಯಾಗದೆ ಕಾಯುವುದು ಒಳಿತು. ಇನ್ನೂ ನಿಮಗೆ ಒಂದೂ ಕಂತಿನ ಹಣ ಜಮಾ ಆಗಿಲ್ಲವಾದರೆ ನಿಮ್ಮ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಮಾಹಿತಿ ಪಡೆಯರಿ.

ಅನೇಕ ಜನರಿಗೆ ಗೃಹಲಕ್ಷ್ಮೀ ಯೋಜನೆಯ 2,000 ರೂ. ತಾಂತ್ರಿಕ ಸಮಸ್ಯೆಯಿಂದ ದೊರೆತಿಲ್ಲ. ದಾಖಲೆಗಳಲ್ಲಿ ದೋಷ ಇರುವುದರಿಂದ ಹಣ ವರ್ಗಾವಣೆ ಆಗಿಲ್ಲ ಎನ್ನುತ್ತಾರೆ ಅಧಿಕಾರಿಗಳು. ಅಂತಹ ಫಲಾನುಭವಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಅಥವಾ ಅಂಗನವಾಡಿ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.

ಇತ್ತಿಚೇಗೆ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ 3 ದಿನಗಳ ವಿಶೇಷ ಶಿಬಿರ ಏರ್ಪಡಿಸಲಾಗಿತ್ತು, ನೀವು ಅಲ್ಲಿ ಭಾಗವಹಿಸಿ ನಿಮ್ಮ ಸಮಸ್ಯೆಯನ್ನು ಹೇಳಿದ್ದರೆ ಚಿಂತೆ ಬಿಡಿ. ಅಧಿಕಾರಿಗಳು ನಿಮ್ಮ ಸಮಸ್ಯೆಯನ್ನು ಪರಿಹರಿಸಬಲ್ಲರು.

ಇತರೆ ಮಾಹಿತಿಗಳನ್ನು ಓದಿ

ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಜಮಾ ಆಗಿದೆಯಾ?

ಗೃಹಲಕ್ಷ್ಮಿ DBT Status Check ಮಾಡಿ, 2000 ರೂ. ಬಂತಾ ನೋಡಿ

ಉಚಿತ ಹೊಲಿಗೆ ಯಂತ್ರ ಯೋಜನೆ, ಆನ್‌ಲೈನ್‌ ಅರ್ಜಿ ಆಹ್ವಾನ

Telegram Group Join Now
WhatsApp Group Join Now

Leave a Comment